Trending

ಹೊಸನಗರ: ಕಾಡು ಹಂದಿ ಬೇಟೆ – ಆರೋಪಿ ಬಂಧನ

Spread the love

ಹೊಸನಗರ : ಕಾಡು ಹಂದಿಯನ್ನು ಅಕ್ರಮವಾಗಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಕೆ.ಜಿ ಮಾಂಸ ಸಹಿತ ಒಬ್ಬ ಆರೋಪಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಹುಣಸವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಣೇಶ ಬಂಧಿತ ವ್ಯಕ್ತಿ. ಇತರ ಆರೋಪಿಗಳಾದ ಡಾಕಪ್ಪ, ಕಾರ್ತಿಕ್ ಪರಾರಿಯಾಗಿದ್ದಾರೆ.

ಎಸಿಎಫ್ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಬೀಟ್ ಫಾರೆಸ್ಟರ್ ಎನ್.ರಾಜು, ಪುಟ್ಟಸ್ವಾಮಿ, ಭರತ್, ಪ್ರದೀಪ್, ಚಾಲಕರಾದ ಪ್ರಮೋದ್, ಎಸ್. ಪಾಲ್ಗೊಂಡಿದ್ದರು.

[pj-news-ticker]