Trending

ಭದ್ರಾ ಹಿನ್ನೀರಿನಲ್ಲಿ ತೆಪ್ಪ ದುರಂತ | ಶಿವಮೊಗ್ಗದ ವಿದ್ಯಾನಗರ ಮೂಲದ ಮೂವರು ನೀರು ಪಾಲು

Spread the love

ಚಿಕ್ಕಮಗಳೂರು ಜಿಲ್ಲೆ ಎನ್‌ಆರ್‌ ಪುರ ತಾಲ್ಲೂಕು ನಲ್ಲಿ ತೆಪ್ಪ ಮುಳುಗಿ ಮೂರು ಮಂದಿ ನೀರು ಪಾಲಾಗಿರುವ ಘಟನೆ ಬಗ್ಗೆ ವರದಿಯಾಗಿದೆ.

ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಭದ್ರಾನದಿಯ ಹಿನ್ನೀರಿನಲ್ಲಿ  ಮೂವರು ಪ್ರವಾಸಿಗರು ತೆಪ್ಪದಲ್ಲಿ ತೆರಳಿದ್ದರು. ಈ ವೇಳೆ ತೆಪ್ಪ ಮುಳುಗಿದ ಪರಿಣಾಮ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ನೀರು ಪಾಲಾದವರನ್ನು  ಶಿವಮೊಗ್ಗ  ನಗರದ ವಿದ್ಯಾನಗರ ಮೂಲದವರು ಎನ್ನಲಾಗುತ್ತಿದ್ದು,  ಆದಿಲ್‌, ಸಾಜೀದ್ ಹಾಗೂ ಅಫ್ದಾಖಾನ್ ಎಂದು ಹೇಳಲಾಗಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ  ವನ್ಯಜೀವಿ ಅರಣ್ಯ ವಿಭಾಗದ ಸಿಬ್ಬಂದಿ ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದೂ, ಮೂವರಿಗಾಗಿ ಹುಡುಕಾಟ ನಡೆಸ್ತಿದ್ದಾರೆ.

[pj-news-ticker]