Spread the love

ಸಾಗರ: ತಾಲ್ಲೂಕಿನ ಆವಿನಹಳ್ಳಿಯ ಗಣೇಶ್ ಹಾಡ್‌ವೇರ್ ಮತ್ತು ಜೈ ಗಣೇಶ್ ವುಡ್‌ವರ್ಕ್ ಮಾಲೀಕ ಕೃಷ್ಣಮೂರ್ತಿ ಆಚಾರ್ ತಯಾರಿಸಿದ 20ಅಡಿ ಉದ್ದದ ವಿಶಿಷ್ಟ ರೀತಿಯ ಪೆನ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಸಿಕ್ಕಿದೆ.

ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ಹತ್ತು ವರ್ಷಗಳ ಹಿಂದೆ ತಯಾರಿಸಿದ್ದ ಸುಮಾರು 20 ಅಡಿ ಉದ್ದದ ಪೆನ್‌ಗೆ ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ದಾಖಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷ್ಣಮೂರ್ತಿ ಆಚಾರ್ ಅವರು ವಿಶ್ವಕರ್ಮಸ್ ಎಂಬ ಹೆಸರಿನಲ್ಲಿ ತಯಾರಿಸಿದ ಈ ಬೃಹತ್ ಪೆನ್‌ಗೆ ಹೈಬ್ರಿಡ್ ಅಕೇಶಿಯಾವನ್ನು ಬಳಕೆ ಮಾಡಿ ಸುಮಾರು 15ದಿನಗಳ ನಿರಂತರ ಕೆಲಸದ ಮೂಲಕ ತಯಾರಿಸಿದ್ದರು. ಈ ವಿಶೇಷವಾದ ಪೆನ್ ಮಾಹಿತಿಯನ್ನು ಗಿನ್ನಿಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಕಳಿಸಲಾಗಿತ್ತು. ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಪೆನ್‌ಗೆ ಸ್ಥಾನ ಸಿಕ್ಕಿದೆ. ತಾಲ್ಲೂಕಿನ ಆವಿನಹಳ್ಳಿಯ ಗಣೇಶ್ ಹಾಡ್‌ವೇರ್ ಮತ್ತು ಜೈ ಗಣೇಶ್ ವುಡ್‌ವರ್ಕ್ ಮಾಲೀಕ ಕೃಷ್ಣಮೂರ್ತಿ ಆಚಾರ್ ತಯಾರಿಸಿದ 20 ಅಡಿ ಉದ್ದದ ವಿಶಿಷ್ಟ ರೀತಿಯ ಪೆನ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಸಿಕ್ಕಿದೆ.

Leave a Reply

Your email address will not be published. Required fields are marked *