Spread the love

ಬೆಂಗಳೂರು: 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಕೈ ಹಿಡಿದು ಯಡಿಯೂರಪ್ಪ ಸರ್ಕಾರ ರಚಿಸಲು ನೆರವಾಗಿದ್ದ ಹಲವರು ಈ ಬಾರಿ ಗೆದ್ದರೆ ಮತ್ತೆ ಹಲವರು ಸೋಲನುಭವಿಸಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಸೇರಿದ್ದ 16 ಶಾಸಕರಲ್ಲಿ 15 ಮಂದಿ ಈ ಬಾರಿ ಸ್ಪರ್ಧೆ ನಡೆಸಿದ್ದರು. ವಿಶ್ವನಾಥ್ ಮಾತ್ರ ಸ್ಪರ್ಧಿಸಿಲ್ಲ. 15 ರಲ್ಲಿ ಐವರು ಮಾತ್ರ ಗೆಲುವು ಕಂಡಿದ್ದಾರೆ.

ಪ್ರಮುಖರಾದ ರಮೇಶ್ ಜಾರಕಿಹೊಳಿ, ಮುನಿರತ್ನ, ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಗೆಲುವು ಕಂಡರೆ, ಬಿಸಿ ಪಾಟೀಲ್, ಡಾ ಕೆ ಸುಧಾಕರ್ ಮುಂತಾದವರು ಸೋಲಿನ ರುಚಿ ಉಂಡಿದ್ದಾರೆ.

ಅರೆಬೈಲು ಶಿವರಾಂ ಹೆಬ್ಬಾರ್: ಗೆಲುವು, ಕೆ ಗೋಪಾಲಯ್ಯ: ಗೆಲುವು, ಬೈರತಿ ಬಸವರಾಜು: ಗೆಲುವು, ಎಸ್ ಟಿ ಸೋಮಶೇಖರ್: ಗೆಲುವು, ರಮೇಶ್ ಜಾರಕಿಹೊಳಿ: ಗೆಲುವು, ಮಹೇಶ್ ಕುಮಟಳ್ಳಿ: ಸೋಲು, ಶ್ರೀಮಂತಗೌಡ ಪಾಟೀಲ್: ಸೋಲು,ಆನಂದ್ ಸಿಂಗ್ (ಪುತ್ರ ಸಿದ್ದಾರ್ಥ ಸಿಂಗ್ ಸ್ಪರ್ಧೆ): ಸೋಲು, ಬಿ.ಸಿ ಪಾಟೀಲ್: ಸೋಲು, ಡಾ.ಕೆ ಸುಧಾಕರ್: ಸೋಲು, ಕೆ.ಸಿ. ನಾರಾಯಣ ಗೌಡ: ಸೋಲು,ಎಂಟಿಬಿ ನಾಗರಾಜು: ಸೋಲು, ಎಚ್ ವಿಶ್ವನಾಥ್: ಸ್ಪರ್ಧೆ ಇಲ್ಲ ,ಪ್ರತಾಪಗೌಡ ಪಾಟೀಲ್: ಸೋಲು,ಆರ್.ಶಂಕರ್: ಸೋಲು, ಎನ್.ಮಹೇಶ್: ಸೋಲು

Leave a Reply

Your email address will not be published. Required fields are marked *